ಬ್ರಾಹ್ಮಣನಾದವನು ತನ್ನ ಬ್ರಾಹ್ಮಣತ್ವವನ್ನು ಉಳಿಸಿಕೊಳ್ಳಬೇಕಾದರೇ ಸಂಧ್ಯಾವಂದನಾದಿ ನಿತ್ಯಕರ್ಮಗಳನ್ನು ಮಾಡುತ್ತಾ ಸಾಧ್ಯವಾದಷ್ಟು ವೇದಾಧ್ಯಯನವನ್ನು ಮಾಡಲೇಬೇಕು. ಜಾತಕರ್ಮಮುಂತಾದ ಸಂಸ್ಕಾರಗಳಿಂದ ಸಂಸ್ಕೃತನಾಗಿ, ವೇದಾಧ್ಯಯನದಿಂದ ತನ್ನ ಬ್ರಹ್ಮತೇಜಸ್ಸನ್ನು ಉಳಿಸಿಕೊಳ್ಳಬೇಕು.

ಲೌಕಿಕ ವಿದ್ಯೆಯಲ್ಲೇ ಒಲವಿರುವವರಿಗೂ ತಮ್ಮ ಮಕ್ಕಳನ್ನು ವೇದಾಧ್ಯಯನ ಮಾಡಿಸಲು ಅನುಕೂಲವಾಗುವಂತೆ " Evening Vedic school " ಎಂಬ ಪರಿಕಲ್ಪನೆಯಲ್ಲಿ ನಮ್ಮ ಗುರುಕುಲದ ವತಿಯಿಂದ ವೇದ - ಸಂಸ್ಕೃತ ಅಧ್ಯಯನಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕಾಗಿ ಕೋರುತ್ತೇವೆ.

ಕೋರ್ಸ್ ಗಳ ವಿವರ

  • ಪ್ರವೇಶ

    2 ವರ್ಷ: ಸಂಧ್ಯಾವಂದನೆ, ದೇವತಾರ್ಚನೆ ಮುಂತಾದ ಉಪಯುಕ್ತ ಮಂತ್ರಗಳ ತರಗತಿ

  • ಮೂಲಾಧ್ಯಯನ

    6 ವರ್ಷ: ಸಂಹಿತಾ ಪಾಠಗಳ ತರಗತಿ

  • ಸಂಸ್ಕೃತಾಧ್ಯಯನಮ್

    2 ವರ್ಷ: ಭಾಷಾಭ್ಯಾಸ, ಉಪಯುಕ್ತ ವಿಷಯಗಳು ಕಾಲೋಚಿತಮ್

  • ಶನಿವಾರ, ಭಾನುವಾರಗಳಲ್ಲಿ ಸಂಧ್ಯಾವಂದನೆ, ದೇವತಾರ್ಚನೆ ಮುಂತಾದ ಉಪಯುಕ್ತ ಮಂತ್ರಗಳ ಪಾಠಗಳು ನಡೆಯಲಿವೆ.

ಶ್ರೀ ಶ್ರುತಿಪರಂಪರಾ ವೇದ,ಸಂಸ್ಕೃತ ಪಾಠಶಾಲಾ

(ಶ್ರೀ ಶ್ರುತಿಪರಂಪರಾ ಗುರುಕುಲಮ್ (ರಿ)ನ ಅಂಗಸಂಸ್ಥೆ)

#665, 2nd Main, 2nd Phase, 7th Block, BSK 3rd Stage, Bangalore – 560085.

Near Nanjundeshwara Stores.

Phone : 98457 05862, 99861 03633, 96202 48168